ಮೊಲ ಮತ್ತು ಆಮೆ

ಮೊಲ ಮತ್ತು ಆಮೆ
————–

ಅನಿರೀಕ್ಷಿತವಾಗಿ
ತುಂಬ ಸಮಯದಿಂದ ನಿರೀಕ್ಷಿಸಿದ್ದ
ಆಮೆ
ಒಂದು ಸಿಕ್ಕಿತು.
ಸಿಹಿ ನೀರಿನ ಬಾವಿಯಲ್ಲೇ ಇತ್ತೋ?
ಪಾರವಿಲ್ಲದ ಸಮುದ್ರದಿಂದ ಬಂತೋ?
ಅಂತೂ ಬಂದ
ಆಮೆ
ಈಗ ಮನೆಯೊಳಗೇ ಮನೆ ಮಾಡಿದೆ.

ಆಮೆ
ನಡಿಗೆ ಎಂಥ ಚಂದ!
ಒಂದೊಂದೇ ಪುಟ್ಟ ಪುಟ್ಟ ಕಾಲನ್ನು ಊರಿ,
ನಿಧಾನಕ್ಕೆ ತಲೆ ಹೊರಗೆ ಹಾಕಿ,ಮೇಲೆ ಎತ್ತಿ,ಅಕ್ಕ ಪಕ್ಕ ನೋಡಿ,ಕಣ್ಣು ಹೊರಳಿಸಿ,
ಮುಂದೆ ಮುಂದೆ ಹೋಗುವ ಅಂದವೇ ಅಂದ.

ತಿನ್ನುವ,ಮೂಸುವ,ಮುಟ್ಟುವ.ಕೇಳುವ,ನೋಡುವ,
ಎಲ್ಲವೂ ಬೇಕು ಇದಕ್ಕೆ!
ಎಷ್ಟು ಬೇಕೆಂದರೆ ಇನ್ನೂರು ವರ್ಷ..
ಬದುಕುತ್ತಂತೆ…
ಅದಕ್ಕೇ
ಆಮೆ
ಎಲ್ಲರಿಗೂ ಇಷ್ಟ.

ಭೂಮಿಭಾರ ಹೊರುವಷ್ಟು ಗಟ್ಟಿ ಚಿಪ್ಪಲ್ಲಿ ನಕ್ಷತ್ರ ಇದ್ದರೆ
ಜಗತ್ತಿನಲ್ಲೆಲ್ಲಾ ಭಾರೀ ಬೆಲೆಯಂತೆ.
ಹೊರಗಿನ ಗಟ್ಟಿಯಷ್ಟೇ ಒಳಗೆ ಮೆತ್ತಗೆ ನೋಡು.
ಅದಕ್ಕೇ ಮನುಷ್ಯನಿಗೆ ನೀನೆಂದರೆ ಅಕ್ಕರೆ.

ಮುಂದೆ ಮುಂದೆ ಓಡಿದ ಮೊಲ,
ಸುಸ್ತಾಗಿ ಮಲಗುವುದು ಖಂಡಿತ.
ಕೊನೆಗೂ ಜಯ ನಿನಗೇ.
ಅದಕ್ಕೇ
ಆಮೆ
ನೀನಾಗು ನಮ್ಮೆಲ್ಲರ ಸಂಗಾತಿ.
ಜೊತೆ, ಜೊತೆಯಲ್ಲೇ
ಅನುಭವಿಸುತ್ತಾ..ಬದುಕನ್ನು ಪೂರ್ತಿ ಆನಂದಿಸೋಣ.
ಅವಸರದ,ವೇಗಿ,ಸುಂದರಿ ಆದರೂ
ಮೊಲವನ್ನು
ಕಳಿಸೋಣ, ದೂ….ರ. ಕಾಡಿಗೆ.
ಆಮೆ
ಇರಲಿ ನಾಡಿಗೆ.
————

http://sharadabooks.blogspot.com

ನೆಮ್ಮದಿ..ಬೇಕಿದ್ರೆ…

ನೆಮ್ಮದಿ..ಬೇಕಿದ್ರೆ…
—————–

ನಿಜಕ್ಕೂ ಅವರಿಗೆ ನನ್ನ ಬಗ್ಗೆ ಪ್ರೀತಿಇದೆಯಾ?
ಇವರಿಗೆ ತುಂಬಾ ಮತ್ಸರಪ್ಪಾ..
ಅವನು ನಿಜವಾಗಿ ನನ್ನ ಕೆಲಸ ಮೆಚ್ಚಿ ಹೇಳಿದ ಮಾತಲ್ಲ ಇದು.

ಅವನಿಗೆ ಖಂಡಿತ ನನ್ನ ಬಗ್ಗೆ ಒಳಗೊಳಗೇ ಅಸಮಧಾನ.ಎದುರಿಗೆ ತೋರಿಸಿಕೊಳ್ಳೊದಿಲ್ಲ ಅಸ್ಟೇ..

ನಮ್ಮನ್ನೇ ಗಮನಿಸುತ್ತಾ ಇರ್ತಾರೆ..
ನನಗೆ ತುಂಬಾ ಗರ್ವ,ಜಂಬ ಅಂತ ಗ್ರಹಿಸಿದ್ದಾನೆ/ಳೆ.
ಇದೆಲ್ಲಾ ಎದೆಯಾಳದ ಮಾತ?
ಹೀಗೆ…
ನಾವು ಇನ್ನೊಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಿರಬಹುದು ಅಂತ ಯೋಚಿಸುವುದು ಎಷ್ಟರಮಟ್ಟಿಗೆ ಸರಿ?
ಅಲ್ಲಾ..ಇನ್ನೊಬ್ಬರ ಮನಸ್ಸಿನಲ್ಲಿ ಏನಿರಬಹುದು?
ಅವನ/ಳ ಯೋಚನೆ ಹೀಗೆಇರುತ್ತೆ ಅಂತ ನಾವು ಹೇಗೆ ಕಂಡುಕೊಳುತ್ತೇವೆ?
ನಾವು ನಮ್ಮನಮ್ಮಲ್ಲೇ ತೀರ್ಮಾನಕ್ಕೆ ಬರುವುದು ತಪ್ಪಲ್ವೇ?
ಇನ್ನೊಬ್ಬರು ಏನು ಯೋಚಿಸ್ತಿರಬಹುದು ಅನ್ನೊ ಯೋಚನೆಯನ್ನು ನಾವು ಮಾಡದಿದ್ರೆ..ಬಹುಶಃ ನಮಗೆ ನೆಮ್ಮದಿ.ಅಲ್ವೇ?
——————————

ಇದೇನು ಕವನವಾ,ಗದ್ಯಬರೆಹವೇ ಅಂತ ಯೋಚಿಸಬೇಡಿ.ವಿಷಯದ ಬಗ್ಗೆ ಗಮನ ಹರಿಸಿ.
ನನ್ನ ಮನಸಿಗೆ ಅನಿಸಿದ್ದು.ಬರೆಹಕ್ಕೆ ಇಳಿದಿದ್ದು ಹೀಗೆ..ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.

http://sharadabooks.blogspot.com/

“ಮಾತು” ನಮ್ಮ ಪ್ರೀತಿಯ ಕಂದ..

“ಮಾತು” ನಮ್ಮ ಪ್ರೀತಿಯ ಕಂದ..
——————

ನಮ್ಮ ಪ್ರೀತಿಯ ಮಗು,ಎಲ್ಲರಂತೆಯೇ
ಮುದ್ದು ಮುದ್ದಾದ,ಮುದ್ದು ಮಗು.

ಕವುಚಿ,ಅಂಬೆಗಾಲಿಕ್ಕಿ,ಹಿಂದೆ ಹಿಂದೆ ಸರಿದು,ಕುಳಿತು
ತ್ತ..ತ್ತಾ..ಅ..ಆ..ಅಮ್ಮಾ ಅಪ್ಪಾ ಎನ್ನುತ್ತಾ ಎದ್ದು
ಪುಟು ಪುಟು..ಹೆಜ್ಜೆ ಹಾಕುತ್ತ ನಡೆದಾಗ,
ಸಂತಸಪಟ್ಟು,ಪೊಟೊ ತೆಗೆದು ಸಂಭ್ರಮಿಸಿದ್ದೇನೆ.

ಆಟ ಪಾಟ,ಶಾಲೆ ಮುಗಿಸಿ,
ಎಲ್ಲ ಬೇಕುಗಳ ಆಸೆಪಟ್ಟು,
ಹಟಹಿಡಿದು,ಅತ್ತು..ಪಡೆದು
ಸಂತಸಪಟ್ಟು ..ಪಟ್ಟು,ಸುಸ್ತಾಗಿದೆ ಈಗ.

ಮಾತೆಂಬ,
ನನ್ನ ಮತ್ತಿನ ಮಗುವೇ,
ಮಲಗಮ್ಮ ಮಲಗು…
ಮಲಗಪ್ಪ ಮಲಗು..
ರಾತ್ರಿಯಾಯಿತು ಕಂದ..
ಸಾಕು ಇಂದಿಗೆ,
ಎದ್ದರೆ ನಾಳೆ ಮತ್ತೆ ಶುರುಹಚ್ಚು…

ಮಲಗು,
ಮಾತೇ..ನನ್ನ ಮುದ್ದಿನ ಮಗುವೇ..
ಮನೆಯ ಮಾಳಿಗೆಯಲ್ಲಿ ಸದ್ದಡಗಿಹೊಗಲಿ…
ಜಾರಿಕೊ..ಕನಸಿನ ಲೊಕಕ್ಕೆ ಕಂದಾ…
ಸಾಕಿಂದಿಗೆ ಸಾಕು..
ರಾತ್ರಿಯಾಯಿತು ಕಂದಾ..
————————-

http://sharadabooks.blogspot.com

ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!

ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!
—————————–

ಹೇಳ್ತಾರೆ..ಹೇಳ್ತಾರೆ..ಸುಮ್ನೇ,
ಸುಮ್ ಸುಮ್ನೇ..ಕಿಸಬಾಯಿ ದಾಸನ೦ತೆ.

ಬಯಸಿದ್ದೆಲ್ಲ ದೊರಕುವುದಿಲ್ಲ,ದೊರಕಿದ್ದೆಲ್ಲ ಬಯಸಿದ್ದಾಗಿರುವುದಿಲ್ಲ!
ಸುಳ್ಳು..ಸ್ವಾಮೀ ಸುಳ್ಳು.
ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!

ಬುದ್ದಿ ತಿಳಿದಾಗಿನಿ೦ದ….ಯೊಚಿಸಿ ನೊಡಿ..
ನೀವು ನೆನೆಸಿದ್ದು..ಆಸೆ ಪಟ್ಟಿದ್ದು,
ಆಗಿಲ್ಲವೇನು ನನಸು?

ಹೈಸ್ಕೂಲು ಮುಗಿದರೆ ಸಾಕು,ಶಿಕ್ಶೆ-ಹೊಮ್ವರ್ಕ್,
ಬಿಟ್ಟು ಯೂನಿಫಾರ್ಮ್,ಅರಾಮ ಕಾಲೇಜು,ಹೇಳೊಲ್ಲ ಯಾರೂ,
ಓದು,ಬರಿ,ಬಾಯಿಪಾಟ,ಗೊಣಗಾಟ.ಆನ೦ದದಿ೦ದ ಕಳೆಯಲಿಲ್ಲವೇ
ಐದಾರುವರ್ಷ..ಜೀವನದ ಸುವರ್ಣಯುಗ!

ದುಡಿಮೆ ಆರ೦ಭಿಸಿದರೆ ಸಾಕು.ವೆಚ್ಚಕ್ಕೆ ಹೊನ್ನು,ಬೆಚ್ಚಕ್ಕೆ ಹೆಣ್ಣು,
ತಾರುಣ್ಯದ ಆಟ,ಸ್ನೇಹಿತರ ಕೂಟ…
ಇಚ್ಚೆಯರಿತು ಬಾಳುವ ಗ೦ಡು,ಹೆಣ್ಣಿನ
ನಮ್ಮಸ೦ಸಾರ…ಆಗಿಲ್ಲವೇ ಆನ೦ದ ಸಾಗರ?

ಸಾಲ ಮಾಡಿ ಕಟ್ಟಿದ ಮನೆಯಾದರೂ,ಉರಿದಿಲ್ಲವೇ ಹೊಟ್ಟೆ,ಅಕ್ಕಪಕ್ಕ ದವರಿಗೆ?
ಸಾಲಕ್ಕೊ,ಶ್ರಾಧ್ಧಕ್ಕೋ ಅ೦ತ ತಮಾಷೆ ಮಾಡುತ್ತಾ,ಪಡೆದ ಮಕ್ಕಳೆರಡೂ,
ಬದುಕಿನ ಪಯಣಕ್ಕೆ ಪಡೆಯಲಿಲ್ಲವೇ ಗಟ್ಟಿ ರೆಕ್ಕೆ!
ಜೀವನದ ಪಯಣದಲ್ಲಿ ಹೊರಳಿ ಮರಳಿ ನೊಡಿದರೆ

ನಿಜಕ್ಕೂ ಗಳಿಸಿದ್ದೇ ಅಧಿಕ,ಕಳೆದದ್ದು ಕ್ಷಣಿಕ.
ತು೦ಬಿದ ಮುಕ್ಕಾಲು ಪಾಲಿಗಿ೦ತಲೂ ಹೆಚ್ಚೇ?
ಖಾಲಿ ಕಾಲು ಪಾಲು?

ಸುಮ್ನೇ… ಸುಮ್ ಸುಮ್ನೇ..ಎಲ್ಲರೂ ಅಳ್ತಾರೆ೦ತ,
ಅಳ್ಬೇಕೆ..ನಾವು ನೀವೂನು?

“ರಾ” ಎ೦ದರೆ ರಾಮಾಯಣ ತಿಳಿವ,
ತಮಗೆ ಗೊತ್ತಿಲ್ಲದ್ದೇನು?..

~~~~~~~~~~~~

http://sharadabooks.blogspot.com

ಎಚ್ಹರವಾಗಲಿದೆಯೇ?

ಎಚ್ಹರವಾಗಲಿದೆಯೇ?
~~~~~~~~~~~~~

ಅ೦ಗಳದ ತು೦ಬೆಲ್ಲ ಆಲಿ ಕಲ್ಲುಗಳು
ರಾಶಿ ರಾಶಿ,ಗೊಲಿ ಗೊಲಿ.
ಬಿದ್ದ ಬೆಳಕಿಗೆ,ಹೊಳೆಯುತ್ತವೆ,ಫಳ ಫಳ,ಥಳ ಥಳ
ಬಣ್ಣ ಬಣ್ಣದ ಕಾಮನಬಿಲ್ಲು
ಕಣ್ಣೆಲ್ಲ ತ೦ಪು ತ೦ಪು..

ಕರಗದ೦ತೆ ಮೄದುವಾಗಿ ಎತ್ತಿ,
ಆಡಬೇಕು ಬಾಯಲ್ಲಿಟ್ಟು
ಚ೦ದ್ರಹಾಸನ೦ತೆ,
ಮನಸ್ಸೆಲ್ಲ ತು೦ಬಲಿ ಉಲ್ಲಾಸದಿ೦ದ..

ಕಾಲಡಿಗೆ ಸಿಕ್ಕಿ ಹುಡಿಯಾಗದ೦ತೆ
ಹೆಜ್ಜೆಗಳ ಮೆಲ್ಲನೆ ಎತ್ತಿಟ್ಟು
ಓಡಾಡಬೇಕು,ಆಡಬೇಕು..
ಹಾವಸೆ ತು೦ಬಿದೆ,ಜಾರಲೂ ಬಹುದಲ್ಲ!
ಜಾಗ್ರತೆಯಿ೦ದ,ಗಟ್ಟಿ ಒತ್ತಿ ಕಾಲೂರಿ
ನಡೆಯಬೇಕು.

ಅರೆ! ಗಟ್ಟಿಯೆಸ್ಟಿದು ಆಲಿಕಲ್ಲು
ಆಡಬಹುದು ಗೊಲಿಯಾಟ,
(ಬೇಕಿದ್ದರೆ ತು೦ಬ ಬಹುದು,ಬ೦ದೂಕಿಗೂ ಗೊಲಿಯಾಗಿ)

ಬಿದ್ದ ಬೆಳಕು ಒ೦ದಾದರೂ ಬಣ್ಣಗಳು ಏಳು
ನಿಜಕ್ಕೂ ಬಣ್ಣ ಯಾವುದು ಹೇಳು?
ಯಾಕೆ?ಇನ್ನೂ ,ಇಷ್ಟು ಹೊತ್ತಾದರೂ
ಕರಗೂದಿಲ್ಲ?ಕರಗಿ ನೀರಾಗುದಿಲ್ಲ?
ನೀರಲ್ಲೆದ್ದ ಗುಳ್ಳೆಗಳೇ..ಇವು..
ಅಲ್ಲ ಅಲ್ಲ ಆಲಿಕಲ್ಲುಗಳೇ..ಖ೦ಡಿತ

ಅಕ್ಕ ಪಕ್ಕದವರೆಲ್ಲ ಮುತ್ತಿ,ಹೊತ್ತು ಕೊ೦ಡೊಯ್ಯುತ್ತಿದ್ದಾರೆ.
ಅವರ ಮನೆಯ೦ಗಳ ಖಾಲಿಯೇ?
ನನ್ನ ಮಕ್ಕಳು ಮರಿಮಕ್ಕಳು..
ಅಟವಾಡಲು ಬೇಡವೇ ನನಗೆ ಇನ್ನಸ್ಟು?

ಕೈಯ ಚಿವುಟಿಕೊ೦ಡರೂ ಅರಿವಾಗುತ್ತಿಲ್ಲ
ನಾನು ಕ೦ಡದ್ದು ಕನಸೇ?
ಗೊತ್ತಾಗುವುದು ಎಚ್ಹರಾದರೆತಾನೆ!!!

ಪ್ರಶ್ನೆಗಳು…

ನನಗೆ ಮಾತ್ರ ಹೀಗೆ ,ಆಗುತ್ತಾ?
ನಿಮಗೂ ಹೀಗೊ೦ದು ಅನಿಸಿಕೆ ಆಗಾಗ
ಕಾಡುತ್ತಾ?
ಸುಮ್ಮನೆ ಇರುವಾಗ,
ಅಲ್ಲ ಮನದೊಳಗೆ ನಾವೇ ಇಣುಕುವಾಗ,
ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,
ಕಿತ್ತು ತಿನ್ನುತ್ತವೆಯೇನು?
ಯಾಕೆ?
ಹೀಗೇಕಾಗುತ್ತದೆ?
ಮನಸ್ಸು ಗೊ೦ದಲದ ಗೂಡಾಗುತ್ತದೆ?
ಒ೦ದೇ ಎರಡೇ ಹಲವು ಪ್ರಶ್ನೆಗಳು
ಯಾಕೋ, ಎಲ್ಲಿ೦ದಲೋ ಬ೦ದು,
ತಲೆ ತಿನ್ನುತ್ತವೆ.
ಅಲ್ಲ!
ನಮ್ಮಲ್ಲಿಯೇ,
ನಮಗೇ ನಾವೇ ಯಾಕೆ ಪ್ರಶ್ನೆಕೇಳಬೇಕು?
ನಮ್ಮಲ್ಲಿ ಹುಟ್ಟಿಕೊ೦ಡ ಪ್ರಶ್ನೆಗಳಿಗೆ ಉತ್ತರ ಯಾರು ಕೊಡಬೇಕು?
ನಾವು ಯಾಕೆ ಉತ್ತರ ಅಪೇಕ್ಶಿಸುತ್ತೇವೆ?
ಇನ್ನೊಬ್ಬರ ಉತ್ತರದಿ೦ದ ನಿಜಕ್ಕೂ ನಮಗೆ ಸಮಾದಾನ ಆಗುತ್ತಾ?
ಉತ್ತರ ಸಿಗದಿದ್ದರೂ,
ನಮ್ಮಲ್ಲಿ ಪ್ರಶ್ನೆಗಳು ಕಡಿಮೆ ಆಗುತ್ತಾ?
ಅಲ್ಲ ಉತ್ತರದಿ೦ದ ಮತ್ತೆ ಪ್ರಶ್ನೆ ಹುಟ್ಟುತ್ತಾ?
ಪ್ರಶ್ನೆಗಳಲ್ಲಿ ಉತ್ತರ ಅಡಗಿರುತ್ತಾ?
ಅಲ್ಲ
ಅಡಗಿರುವ ಉತ್ತರಕ್ಕಾಗಿಯೇ ಪ್ರಶ್ನೆ ಕೇಳುತ್ತೇವೆಯೇ?
ಒ೦ದರಹಿ೦ದೊದು ಬರೀ ಪ್ರಶ್ನೆಗಳು..
ಗೊತ್ತಿರುವ ಪ್ರಶ್ನೆಗಳಿಗೆ ಗೊತ್ತಿಲ್ಲದ ಉತ್ತರಗಳು..
ಗೊತ್ತಿಲ್ಲದ ಪ್ರಶ್ನೆಗಳಿಗೆ,ಉತ್ತರಕ್ಕಾಗಿ…
ಪ್ರಶ್ನೆಗಳು ಮಾತ್ರ!
ಹೀಗೇಕಾಗುತ್ತದೆ?

ಹುಟ್ಟು-ಬದುಕು-ಸಾವು
ಬ೦ದದ್ದೆಲ್ಲಿ೦ದ?ಇರುವುದು ಯಾಕೆ?ಹೋಗುವುದೆಲ್ಲಿಗೆ?
ತಿಳಿಯುವ ಬಗೆಯೆ೦ತು?ಅರಿತು ಮಾಡುವುದೇನು?
ನನಗ೦ತೂ ಹೊಳೆದಿಲ್ಲ!
ಇದ್ದೇನೆ ಇಲ್ಲೇ….ಯಾಕೋ ಗೊತ್ತಿಲ್ಲ!

ಮುಖವಾಡ ಕಳಚೂದಿಲ್ಲ

ಮುಖವಾಡ ಕಳಚೂದಿಲ್ಲ
ಯಾಕೆ ನಾವು?

ಬೆದರಿಕೆಯೇ
ನಿಜ ಮುಖ ತೊರಿಸಲು..
ತನ್ನ ಬದುಕನ್ನು ತನಗೆ ಬೇಕಾದ೦ತೆ
ಕಟ್ಟಿಕೊಳ್ಳಲು..

ಇ೦ದು ನಿನ್ನೆಯದಲ್ಲ ಈ ರೀತಿ
ಲಾಗಾಯ್ತಿ೦ದಲೂ ಮನುಜನ ಈ ಗತಿ
ಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿ

ಅ೦ದುಕೊಳ್ಳುವುದು ಒ೦ದು
ಅನ್ನುವುದು ಇನ್ನೊ೦ದು!
ಇರುವುದೆಲ್ಲವ ಒಳಗಿರಿಸಿ ಮಡಿಸಿ,
ಇನ್ನೊಬ್ಬರ ಮುಡಿಗೆ ಹೂ ಮುಡಿಸಿ,
ಪಡುವ ಸ೦ತೊಷ..ಆಹಾ ಆ ತೊಷ,
ನೆಮ್ಮದಿ..ನಿರುಮ್ಮುಳ.

ನಮಗೆ ನಾವೇ ಮಾಡಿಕೊಳ್ಳುವ
ವ೦ಚನೆ, ತರುವ ಆನ೦ದವೇ!!
ಆತ್ಮರತಿ…
ನಮಗೆ ನಮ್ಮದೇ ಆರತಿ.

ಹೆದರಿಕೆ ಅ೦ದಿರಾ..
ಅಲ್ಲಪ್ಪಾ…
ಸಹಜಾತ..ಸಹಜ ಗುಣ.. ಸದ್ಗುಣ.

ತೊಟ್ಟು ಮುಖವಾಡ
ಬಳಿದು ಬಣ್ಣ.
ಲೋಕದಲಿ ಆಟ ಚೆನ್ನ.

ಪ್ರಹಸನ,ಪ್ರದಶನ,
ಪ್ರಶ೦ಸೆಗಿಟ್ಟಿಸಿತೆ೦ದು,ನಮ್ಮ ಬೆನ್ನು
ನಾವೇ ತಟ್ಟಿಕೊಳ್ಳುತ್ತಾ…
ಬೀಗಿ ಬಿರಿಯುವುದು ಯಾರ ಎದುರಿಗೋ…?

ಎ೦ದಿಗೆ ಕೊನೆಯೊ?
ಮುಳ್ಳಿನ ಮೊನೆಯ ಈ ಮನೆಯ ಬದುಕು?

ಹೊತ್ತು ಮುಖವಾಡ,ಸುಸ್ತೋ ಸುಸ್ತು!
ಇನ್ನೂ ಕಳಚಿಕೊಳ್ಳೋದಿಲ್ಲ
ಯಾಕೆ ನಾವು?

ಪ್ರೀತಿ,

ಪ್ರೀತಿ,
ಉ೦ಡು.ಉಟ್ಟು,ಉರಿದುಹೋಗದ
ಬಳಿದರೂ ಬರಿದಾಗದ,
ಮೊಗೆ ಮೊಗೆದರೂ ಮುದದಿ೦ದುಕ್ಕುವ,
ಚಿರಂತನ ಒರತೆ.

ಚಿರಕಾಲದಿ೦ದ
ಮನುಜನ ಮನಕ್ಕೊ೦ದು
ಮಜಬೂತಾದ ಆದಾರ.

ಪ್ರೀತಿಯಲ್ಲಿ ನೋವಿದೆ,ವಿರಹವಿದೆ,
ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿ
ಇತ್ತೀಚೆಗಿನ ಆರೊಪ,ಪ್ರಲಾಪ.

ಸ್ನೆಹ-ಸಹಜ,ಸು೦ದರ,ಪವಿತ್ರ
ಅ೦ತ
ಜನರೆಲ್ಲ ಬರೆದದ್ದೇ ಬರೆದದ್ದು.
ಹಾ ಹಾ ಎ೦ದು ತಲೆದೂಗಿದ್ದೇ ತೂಗಿದ್ದು.

ಸ್ನೆಹವಿಲ್ಲದೆ ಪ್ರೀತಿ ಚಿಗುರುವುದೇ?
ಪ್ರೀತಿಯಿಲ್ಲದೆ ಸ್ನೆಹ ಬಾಳುವುದೇ?

ಪ್ರೀತಿ-ಸ್ನೇಹಗಳು
ಸ೦ಬ೦ದದೆರಡು ಕಣ್ಣುಗಳು
ಜೀವನದ ಜೀವನದಿಗಳು.

ಸ್ನೇಹಗಳಿಸೋದು,ಪ್ರೀತಿ ಉಳಿಸೋದು
“ಬೀಜದಿ೦ದ ಮರವೇ?ಮರದಿ೦ದ ಬೀಜವೇ”
ಹಾಗೆ ಸುಮ್ಮನೆ ಕಾಲಹರಣ ಸ೦ಗತಿ.
“ಸ೦ತೆಯೊಳಗೊ೦ದು ಗೋವಿ೦ದ.”

ಸ್ನೇಹಿತರಾಗಿ ಪ್ರೀತಿ ಸವಿಯೋಣ,
ಪ್ರೀತಿಸುತ್ತಾ ಸ್ನೇಹ ಉಳಿಸೋಣ.

ಹ್ರ್ ದಯ–ಮನಸಲಿ ???
( ಎದೆಯಾಳದ ಪ್ರೀತಿ,ಮನದಾಳದಸ್ನೇಹ )

ಎರಡೂ ಇರಲಿ ಸುಖವಾಗಿ
ಸಖಿಗೆ ಸಖನಾಗಿ,
ಸಖಗೆ ಸಖಿಯಾಗಿ.

ಪ್ರೀತಿ,ಸ್ನೇಹ,ಒಲವು,
ಒಳ್ಳೆಯತನ ಕ್ಕಿನ್ನೊ೦ದು ಮುಖವಾಗಲಿ
ಎಲ್ಲರದಾಗಲಿ,
ವರವಾಗಲಿ, ಸುಖ , ಶಾ೦ತಿ.
————————

ಚಿಂತೆ

ಚಿಂತೆ

ಯಾರಿಗೆ ಬೇಡ ಹೇಳಿ?

ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .

ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

ಚಿಂತೆ ಯಾರಿಗೆ ಬೇಡ?

ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,

ಚಿಂತೆ ಯಾಕೆ ಬೇಡ ಹೇಳಿ ?

ಚಿಂತೆ ಯಾಕೆ ಮಾಡತಿಯಾ ?…………….
ಕೇಳೋದು ಸುಲಬ!

ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !

ನೀರಲ್ಲಿ ಮೀನಿನ ಹೆಜ್ಜೆ ಗುರುತೂ …ಹೆಂಗಸಿನ ಮನಸ್ಸೂ…..

ನೀರಲ್ಲಿ ಮೀನಿನ ಹೆಜ್ಜೆ ಗುರುತೂ …ಹೆಂಗಸಿನ ಮನಸ್ಸೂ…..
ತಿಳಿಯದಂತೆ! ಸರಿಯೇ….
ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟ
ಅಂತಾರೆ.ಯಾಕೊ ಏನೋ…..
ಅಲ್ಲ..
ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?

ಯಾರ ಮನಸ್ಸನ್ನು ಯಾರಿಗೂ ತಿಳಿಯಲು
ಸಾದ್ಯವಿಲ್ಲ.
ತಿಳಿದಿರುವೆ ಅಂತ
“ಬೆಕ್ಕಿನ ಕೋಡು ನೋಡಿದವ “
ಹೇಳಬೇಕು!ನಾವು ನಂಬಬೇಕು!

(ಹೇಳಿಕೆ ಕೊಡುವುದು,ಎಂಥ ಅಪ್ಪಟ ಸುಳ್ಳು, ಅಥವಾ ಅಹಂಕಾರ ಎನ್ನೋಣವೇ?)

ಇನ್ನೊಬ್ಬರಿಗೆ ಬಿಡಿ..
ಅವರವರಿಗೇ ತಮ್ಮ ಮನಸ್ಸು
ಎಲ್ಲಿ
ಹೇಗೆ
ಯಾಕೆ
ಯಾವಾಗ
ಕುಣಿಯುತ್ತದೆ
ಅಂತ ಗೊತ್ತೇನು ?

ಮನಸ್ಸನ್ನು ಮಣಿಸಿದರೆ ನಾವು
“ಅವನೇ ಆದಂತೆ”
ಸುಕಾ ಸುಮ್ಮನೆ ಅವರಿವರ ಮನಸ್ಸು ಅರಿಯಲು
ಸಾದ್ಯವಿಲ್ಲ,ಅಂತ ತೀರ್ಮಾನಿಸುವ
ನಿರ್ದಾರ,
“ಕಣ್ಣು ಮುಚ್ಚಿ ಹಾಲು ಕುಡಿದಂತೆ”
ನೀವು ಏನ೦ಥಿರ ?

Follow

Get every new post delivered to your Inbox.